Asianet Suvarna News Asianet Suvarna News

ಸಂಬಳ ಡಿಮ್ಯಾಂಡ್ ಇಟ್ಟೆ ಕೊಟ್ರು; ರಾಮಚಾರಿ ಸೀರಿಯಲ್‌ನಿಂದ ಹೊರ ಬರಲು ಕಾರಣ ಬಿಚ್ಚಿಟ್ಟ ಅಭಿಜ್ಞಾ

ಇದ್ದಕ್ಕಿದ್ದಂತೆ ರಾಮಚಾರಿ ಸೀರಿಯಲ್‌ನಿಂದ ಹೊರ ಬಂದ ಅಭಿಜ್ಞಾ. ನನ್ನ ಕಲೆ ಗುರುತಿಸುವ ಪಾತ್ರ ಸಿಕ್ಕಿದೆ ಎಂದ ನಟಿ...

Star Suavrna Gowri Shankara Aishu aka Abhijna Vishwanath talks about quitting Ramachari serial vcs
Author
First Published May 10, 2024, 11:28 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅಭಿಜ್ಞಾ ಇದ್ದಕ್ಕಿದ್ದಂತೆ ಸೀರಿಯಲ್‌ನಿಂದ ಹೊರ ಬಂದರು. ರಾಮಚಾರಿಯನ್ನು ಹುಚ್ಚಿಯಂತೆ ಪ್ರೀತಿಸುವ ಮಾವನ ಮಗಳು ದೀಪಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಮಚಾರಿ ಮತ್ತು ಚಾರು ನಡುವೆ ಪ್ರೀತಿ ಬೆಳೆಯುತ್ತಿದ್ದಂತೆ ದೀಪಾ ಪಾತ್ರ ಮಾಯವಾಗಿತ್ತು. ರಾಮಚಾರಿ ಸೀರಿಯಲ್‌ನಿಂದ ಹೊರ ಬಂದು ಮತ್ತೊಂದು ದೊಡ್ಡ ಪ್ರಾಜೆಕ್ಟ್‌ ಒಪ್ಪಿಕೊಂಡಿರುವ ಅಭಿಜ್ಞಾ ಮಾತುಗಳಿದು... 

'ರಾಮಾಚಾರಿ ಸೀರಿಯಲ್‌ನಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು ಆದರೆ ದೀಪಾ ಪಾತ್ರಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಒಂದು ದಿನ ಗೌರಿ ಶಂಕರ ಸೀರಿಯಲ್ ಮ್ಯಾನೇಜರ್ ಕರೆ ಮಾಡಿ ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದ್ದರು. ಆಯ್ಯೋ ಆಗಲ್ಲ ನಾನು MBA ಮಾಡುತ್ತಿರುವ ಸಮಯ ಇಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದರೂ ಯೋಚನೆ ಮಾಡಲು ಹೇಳಿದರು. ಸರಿ ಆಯ್ತು ಎಂದು ಯೋಚನೆ ಮಾಡಿ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದೆ. ಹೀರೋ ತಂಗಿ ಪಾತ್ರ ಆಗಿದ್ದರೂ ನೀವು ಎರಡನೇ ನಾಯಕಿ ಆಗಿರುತ್ತೀರಾ. ವಜ್ರಕಾಯ ಚಿತ್ರದ ಪಟಾಕ ಪಾತ್ರದಲ್ಲಿ ನೀವು ಕಾಣಿಸಿಕೊಳ್ಳುತ್ತೀರಾ ಎಂದುಬಿಟ್ಟರು. ಆಡಿಷನ್ ಮಾಡಿ ಆಯ್ಕೆ ಮಾಡುತ್ತಾರೆ ಅಂದುಕೊಂಡೆ ಆದರೆ ಆಫೀಸ್‌ಗೆ ಕರೆದು ನೇರಾ ಬಾಂಡ್ ಪೇಪರ್‌ನ ನನ್ನ ಮುಂದೆ ಇಟ್ಟುಬಿಟ್ಟರು. ನಾನು ಸಂಭಾವನೆ ಇಷ್ಟು ಬೇಕು ಎಂದು ಡಿಮ್ಯಾಂಡ್ ಮಾಡಿದೆ ಅದಕ್ಕೂ ಒಪ್ಪಿಕೊಂಡರು' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಅಭಿಜ್ಞಾ ಮಾತನಾಡಿದ್ದಾರೆ. 

ಮೂಗು ಚುಚ್ಚಿಸಿಕೊಂಡ 'ರಾಮಾಚಾರಿ' ದೀಪಾ; ಸಿಡುಕಿ ಆದರೂ ಸುಂದರಿ ಎಂದ ನೆಟ್ಟಿಗರು!

'ತುಂಬಾ ದಿನಗಳಿಂದ ಜನರು ನನ್ನ ಆಕ್ಟಿಂಗ್‌ನ ಗುರುತು ಹಿಡಿಯಬೇಕು ಅನ್ನೋ ಆಸೆ ತುಂಬಾ ಇತ್ತು. ನನ್ನ ಮತ್ತು ಬೆಳ್ಳುಳ್ಳಿ ಕ್ಯಾರೆಕ್ಟರ್‌ನ ಜನರು ತುಂಬಾ ಇಷ್ಟ ಪಡುತ್ತಿದ್ದಾರೆ. ನನ್ನಲ್ಲಿ ಇರುವ ಕಲಾವಿದೆಗೆ ತುಂಬಾ ಖುಷಿಯಾಗಿದೆ. ಇಷ್ಟು ವರ್ಷ ಕಾದಿದ್ದಕ್ಕೂ ಒಳ್ಳೆ ಹೆಸರು ಸಿಗುತ್ತಿದೆ. ಐಶು ಪಾತ್ರ ತೆರೆ ಮೇಲೆ ಇಲ್ಲ ಅಂದ್ರೆ ನೋಡಲು ಮನಸ್ಸು ಬರಲ್ಲ ಅಂತ ಕಾಮೆಂಟ್ ಮಾಡ್ತಾರೆ. ಐಶು ಪಾತ್ರದಿಂದ ನನಗೆ ಸಿನಿಮಾ ಆಫರ್‌ಗಳು ಬರುತ್ತಿದೆ. ನಿಜ ಹೇಳಬೇಕು ಅಂದ್ರೆ ತಮಿಳು ಮತ್ತು ತೆಲುಗು ಸೀರಿಯಲ್‌ನಲ್ಲಿ ಆಫರ್‌ ಬರುತ್ತಿದೆ. ರಂಗಭೂಮಿ ಕಲಾವಿದೆಯಾಗಿ ನಾನು ಸಣ್ಣ ಸಣ್ಣ ಪಾತ್ರ ಮಾಡಿಕೊಂಡು ಎಲ್ಲೋ ಸೈಡ್‌ನಲ್ಲಿ ನಿಂತುಕೊಂಡು ಎಕ್ಸ್‌ಪ್ರೆಶನ್‌ ಕೊಡುತ್ತಿರುವೆ ಎಂದು ಅದೆಷ್ಟೋ ದಿನ ಕಣ್ಣೀರು ಹಾಕಿರುವೆ' ಎಂದು ಅಭಿಜ್ಞಾ ಹೇಳಿದ್ದಾರೆ. 

Follow Us:
Download App:
  • android
  • ios